Monday, March 23, 2015

ಕರಾವಳಿಯ ಅತ್ಯಾಧುನಿಕ ಎಣ್ಣೆ ಗಿರಣಿ ‘ಕೋಕೊಗುರು’

                                                                             ಆಡಳಿತ ನಿರ್ದೇಶಕ ಕೇಶವರಾಮ್



ಚಿತ್ರ, ನುಡಿಚಿತ್ರ : ಪಡಾರು

ಕೃಷಿಕರಿಂದಲೇ ತೆಂಗು ಕೊಳ್ಳುವ ನೀತಿ ಕಾಯ್ದುಕೊಂಡಿರುವ ಈ ಸಂಸ್ಥೆಯಿಂದಾಗಿ ಸ್ಥಳೀಯ ಕೃಷಿಕರಿಗೆ ಒಳ್ಳೆ ಮಾರುಕಟ್ಟೆ ಸಿಕ್ಕಿದೆ.

ಪುತ್ತೂರಿನ ಹೊರವಲಯದ ಕಲ್ಲರ್ಪೆಗೆ ಬನ್ನಿ. ಇಲ್ಲಿ ಒಂದೆಡೆ ಪ್ರತಿದಿನ ನಲುವತ್ತು ಸಾವಿರ ತೆಂಗು ಹಿಂಡಿ ಹಿಪ್ಪೆಯಾಗಿ ಎಣ್ಣೆಯಾಗುತ್ತದೆ. ಬೆಳಗ್ಗೆ ಕೊಬ್ಬರಿಯಾಗಿದ್ದದ್ದು ಸಂಜೆ ಹೊತ್ತಿಗೆ ಎಣ್ಣೆಯಾಗಿ ಪೊಟ್ಟಣ ಸೇರಿಕೊಳ್ಳುತ್ತದೆ. .ಕ ಅಥವಾ ನೆರೆಯ ಉಡುಪಿ ಜಿಲ್ಲೆಯ ಯಾವುದೋ ಊರಿಗೆ ತಲಪುತ್ತದೆ. ಮಹಿಳೆಯರ ತಲೆ ತಂಪು ಮಾಡಲು ದೂರದ ಗುಜರಾತಿಗೆ ಹೋಗಲೂಬಹುದು. ಕರಾವಳಿ ಕರ್ನಾಟಕದ ಮೊತ್ತಮೊದಲ ಅತ್ಯಾಧುನಿಕ ತೆಂಗಿನೆಣ್ಣೆ ಘಟಕವಿದು.
ಇಂತಹ ದೊಡ್ಡ ಕಾರ್ಖಾನೆಗಳು ಸಾಮಾನ್ಯವಾಗಿ ಕಚ್ಚಾವಸ್ತು ಪೂರೈಕೆಗೆ ಮಧ್ಯವರ್ತಿಗಳನ್ನೇ ಅವಲಂಬಿಸುತ್ತವೆ. ಏಕೆಂದರೆ ಅದು ಸುಲಭ. ಆದರೆ ಈ ಗಿರಣಿ ಹಾಗಲ್ಲ. ಈಗಲೂ ಕೃಷಿಕರಿಂದ ತೆಂಗಿನಕಾಯಿ, ಕೊಬ್ಬರಿ ಕೊಳ್ಳುತ್ತದೆ. ಕನಿಷ್ಟ 2000 ಕಾಯಿ ಇದ್ದರೆ ಮನೆಯಿಂದಲೇ ನೇರ ವ್ಯಾಪಾರ ಮಾಡುತ್ತೇವೆ ಎನ್ನುತ್ತಾರೆ ಇವರು. ಇದು ಕೋಕೊಗುರು ಎಣ್ಣೆ ಗಿರಣಿಯ ವೈಶಿಷ್ಟ್ಯತೆ. ಸಂಸ್ಥೆಯ ಸ್ಥಾಪಕ ಶಿವಶಂಕರ ಭಟ್ ಬೋನಂತಾಯ (62) ಕೃಷಿಕರು. 
ಇವರ ಉತ್ಪನ್ನದಲ್ಲಿ ರೋಸ್ಟೆಡ್ ಕೊಕೊನಟ್ ಆಯಿಲ್ ವಿಶೇಷದ್ದು. ಹಬೆಯಲ್ಲಿ ಬೆಂದ ಕೊಬ್ಬರಿಯಿಂದ ಎಣ್ಣೆ ತಯಾರಿ. ಎಂಭತ್ತು ಮಂದಿಗೆ ನೇರ ಉದ್ಯೋಗ. ಈ ಸಂಸ್ಥೆಯಿಂದಾಗಿ ಸ್ಥಳೀಯ ತೆಂಗಿನಕಾಯಿ, ಕೊಬ್ಬರಿಗೆ ಉತ್ತಮ ಮಾರುಕಟ್ಟೆ ಸಿಕ್ಕಿದೆ.  ತೆಂಗಿನಕಾಯಿ ಸೀಸನ್ ಪೂರ್ತಿ - ಜನವರಿಯಿಂದ ಜೂನ್ ತನಕ  ಇವರಿಗೆ ಸ್ಥಳೀಯ ಕಚ್ಚಾವಸ್ತು ಸಿಗುತ್ತಿದೆ.  ಮಳೆಗಾಲದಲ್ಲಿ ಮಾತ್ರ ದೂರದ ತಿಪಟೂರು ಕೊಬ್ಬರಿಗೆ ಶರಣು ಹೇಳಬೇಕಾಗಿ ಬರುತ್ತದೆ.
ಮೂರು ವರ್ಷಗಳಲ್ಲಿ (ಆರಂಭ : 2012) ಕಾರ್ಖಾನೆ ಹಂತಹಂತವಾಗಿ ಮೇಲೇರಿದೆ.  ಸೀಸನಿನಲ್ಲಿ ಪ್ರತಿನಿತ್ಯ 12,000 ಲೀಟರ್ ಎಣ್ಣೆ ಉತ್ಪಾದನೆಯಾಗುತ್ತಿದೆ.  .. ಉಡುಪಿ ಜಿಲ್ಲೆಯ ಎಲ್ಲಾ ಪೇಟೆ, ಹಳ್ಳಿಗಳಿಗೂ ಸರಬರಾಜಾಗುತ್ತದೆ.  ನಾಲ್ಕು ವ್ಯಾನ್ ಗಳಿಗೆ ಇದೇ ಕೆಲಸ.  ಮೈಸೂರು ಬೆಂಗಳೂರಿಗೂ ಸರಬರಾಜು ಆಗುತ್ತಿದೆ.  ಹೇರ್ ಆಯಿಲ್ ಆಗಿ ಗುಜರಾತ್ ನಲ್ಲಿಯೂ ಬೇಡಿಕೆ ಇದೆಎನ್ನುತ್ತಾರೆ ಆಡಳಿತ ನಿರ್ದೇಶಕ ಕೇಶವರಾಮ್ ಬೋನಂತಾಯ. ಇವರು ಶಿವಶಂಕರರ ದೊಡ್ಡ ಮಗ.
(ಲೇಖನದ ಪೂರ್ಣಪಾಠ ಜಾಲ ತಾಣದಲ್ಲಿದೆ - www.adikepatrike.com)

1 comment:

  1. How to find the closest casino to me. | Tricktactoe
    You can 스포츠 토토 배당률 보기 also use the links that link 텐벳 먹튀 to all casinos that are on the list of 스포츠토토 최고배당 벳피스트 casinos 사설토토 규모 샤오미 with the closest casino to me. · 스포츠토토 판매점 위치 샤오미 Open an account. · Make your

    ReplyDelete